ಕನ್ನಡದ ಬರಹಗಾರರು, ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹೆಸರು ಪಡೆದಿರುವ ಡಾ.ಶಿಶಿಲರು. == ಹುಟ್ಟು == ಸುಳ್ಯ ತಾಲೂಕಿನಪಂಜ ಸಮೀಪದ ಕೂತ್ಕುಂಜದಲ್ಲಿ 21-12-1953ರಲ್ಲಿ ಜನನ. ಪ್ರಸ್ತುತ ಅಜ್ಜಾವರ ಗ್ರಾಮದ ಕಾಂತಮಂಗಲದಲ್ಲಿ ನೆಲೆಸಿದ್ದಾರೆ. == ವಿದ್ಯಾರ್ಹತೆ == ಪ್ರಾರಂಭಿಕ ಶಿಕ್ಷಣ ಶಿಶಿಲ, ಕುಂಟಲ ಪಲ್ಕೆ, ಕೊಕ್ಕಡ ಮತ್ತು ಅರಸಿನ ಮಕ್ಕಿ ಮುಂತಾದೆಡೆಗಳಲ್ಲಿ ಪೊರೈಸಿದ್ದಾರೆ. 1974ಉಜಿರೆಯ ಎಸ್.ಡಿ.ಎಂ.ಕಾಲೇಜಿನಿಂದ ಬಿ. ಎ. ದ್ವಿತೀಯ ರ್ಯಾಂಕ್ ಪಡೆದಿರುತ್ತಾರೆ. 1976 ಮೈಸೂರು ವಿವಿ.ಯಿಂದ ಎಂ. ಎ. ನಾಲ್ಕು ಬಂಗಾರದ ಪದಕಗಳೊಡನೆ. 1993 ಗುಲಬರ್ಗ ವಿಶ್ವವಿದ್ಯಾಲಯಕ್ಕೆ ‘ಫಿಶರೀಸ್ ಕೋ ಆಪರೇಟಿವ್ ಇನ್ ಇಂಡಿಯಾ ವಿತ್ ಪರ್ಟಿಕ್ಯುಲರ್ ರೆಫರೆನ್ಸ್ ಟು ಕರ್ನಾಟಕ’ ಪ್ರಬಂಧ ಮಂಡಿಸಿ ಪಡೆದ ಪಿ.ಎಚ್.ಡಿ. ಪದವಿ == ಪ್ರಕಟಿತ ಕೃತಿಗಳು == ಗಗ್ಗರ ಬಾರಣೆ ಗುಜರಿ ಅದ್ದಿಲಿಚ್ಚನ ಜಿಹಾದಿಯ. ಕೊಡಗಿನ ಐತಿಹ್ಯ ಕಥೆಗಳು. ಬೆಟ್ಟದಾ ಮೇಲೊಂದು ಕಪಿಲಳ್ಳಿಯ ಕತೆಗಳು. ಜಲಲ ಜಲದಾರೆ. ಮೂಡಣದ ಕೆಂಪು ಕಿರಣ. ಎನ್ ಗ್ರಾಚರ ಸಾ. ಕುಡೆಕಲ್ಲು ಅಪ್ಪಯ್ಯ ಗೌಡ. ದೊಡ್ಡ ವೀರ ರಾಜೇಂದ್ರ. ಕೊಡಗಿನ ಕತೆಗಳು ಪುಂಸ್ತ್ರೀ. ಕನ್ನಡದಲ್ಲಿ 115 ಅರ್ಥಶಾಸ್ತ್ರ ವಿಚಾರ ಸಾಹಿತ್ಯ ಕೃತಿಗಳು. ಆಂಗ್ಲ ಭಾಷೆಯಲ್ಲಿ 10 ಅರ್ಥಶಾಸ್ತ್ರ ಕೃತಿಗಳು. === ಶಿಶಿಲರ ಬಗ್ಗೆ ಬಂದ ಕೃತಿಗಳು === 2003 ಹೆಜ್ಜೆ: ಸುವರ್ಣ ಅಭಿನಂದನಾ ಸ್ಮರಣಿಕೆ. 2013 ಸಾಹಿತ್ಯ ಶಿಶಿಲ: ಶಿಶಿಲರ ಸಮಗ್ರ ಸಾಹಿತ್ಯ ವಿಮರ್ಶೆ 2017 ಹಿರಿಯ ಸಾಹಿತಿ ಪ್ರಭಾಕರ ಶಿಶಿಲ: ಶಿಶಿಲರ ಜೀವನ ಮತ್ತು ಸಾಧನೆಗಳು. 2018 ಪ್ರಭಾಕರ ಶಿಶಿಲರ ಸಾಹಿತ್ಯ: ಡಾ. ಮೋಹನ ಕುಮಾರರ ಪಿಹೆಚ್.ಡಿ. ಮಹಾ ಪ್ರಬಂಧ === ಅನುವಾದಗೊಳ್ಳುತ್ತಿರುವ ಕೃತಿಗಳು === ಪುಂಸ್ತ್ರೀ - ಸಂಸ್ಕøತ, ಹಿಂದಿ, ಮಲೆಯಾಳಂ, ತೆಲುಗು, ತಮಿಳು, ತುಳು, ಕೊಂಕಣಿ, ಮರಾಠಿ, ಅರೆಭಾಷೆ ಮತ್ಸ್ಯಗಂಧಿ- ಇಂಗ್ಲೀಷ್, ತೆಲುಗು, ತಮಿಳು, ತುಳು, ಅರೆಭಾಷೆ ಕಪಿಲಳ್ಳಿಯ ಕತೆಗಳು – ತುಳು ಮತ್ತು ಅರೆಭಾಷೆ ಮೂಡಣದ ಕೆಂಪುಕಿರಣ – ತುಳು ಇರುವುದೆಲ್ಲವ ಬಿಟ್ಟು – ತುಳು == ಸಂಶೋಧನ ಮಾರ್ಗದರ್ಶಕ == ಹಂಪಿ ಕನ್ನಡ ವಿ.ವಿ. ಸಂಶೋಧನಾ ಮಾರ್ಗದರ್ಶಕ ನಾಲ್ವರಿಗೆ ಕನ್ನಡದಲ್ಲಿ ಪಿಹೆಚ್.ಡಿ.ಗೆ ಮಾರ್ಗದರ್ಶಕ. ಏಳು ಕನ್ನಡಿಗ ವಿದ್ಯಾರ್ಥಿಗಳಿಗೆ ಎಂ.ಫಿಲ್ಲ್ ಮಾರ್ಗದರ್ಶಕ ಕನ್ನಡಿಗ ಡಾ. ಬ್ರಹ್ಮಾನಂದ ಹೆಸರಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆ. == ಪ್ರಸಸ್ತಿಗಳು == 1999- ದೇಶ ಯಾವುದಾದರೇನು ಯುರೋಪು ಪ್ರವಾಸ ಕಥನಕ್ಕೆ ಗೊರೂರು ಪ್ರಶಸ್ತಿ. 2003-ಸುಳ್ಯದಲ್ಲಿ ಶಿಶಿಲರಿಗೆ ಸಾರ್ವಜನಿಕ ಅಭಿನಂದನೆ ಮತ್ತು ಹೆಜ್ಜೆ ಸಂಸ್ಮರಣಾ ಗ್ರಂಥ ಅರ್ಪಣೆ. 2004- ಕಪಿಲಳ್ಳಿಯ ಕಥೆಗಳು ಸಂಕಲನಕ್ಕೆ ದಾವಣಗೆರೆಯ ಪಂಪ ಪ್ರತಿಷ್ಠಾನದ ಸಾಹಿತ್ಯಶ್ರೀ ಪ್ರಶಸ್ತಿ. 2005- ಶಾರ್ಜಾ ಧ್ವನಿ ಪ್ರತಿಷ್ಟಾನದ ವಿಶ್ವಗನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಪ್ರಶಶ್ತಿ. 2006- ಬೆಂಗಳೂರಿನ ಬುಕ್ ಪ್ರಾರಡೈಸ್ ಸಂಸ್ಥೆಯಿಂದ ಸುವರ್ಣ ಕರ್ನಾಟಕ ಅತ್ಯುತ್ತಮ ಪ್ರಾಧ್ಯಾಪಕ ಪ್ರಶಸ್ತಿ. 2007- ಪುಂಸ್ತ್ರೀಗೆಶಿವಮೊಗ್ಗ ಕರ್ನಾಟಕ ಸಂಘದಿಂದ ಕುವೆಂಪು ಕಾದಂಬರಿ ಪ್ರಶಸ್ತಿ. 2008- ಪುಂಸ್ತ್ರೀಗೆ ಗದಗದ ಪುಟ್ಟರಾಜ ಗವಾಯಿ ಕಾದಂಬರಿ ಪ್ರಶಸ್ತಿ. 2009- ನದಿ ಎರಡರ ನಡುವೆ ಕೃತಿಗೆ ಮಾಸ್ತಿ ಕಾದಂಬರಿ ಪ್ರಶಸ್ತಿ. 2009- ಸುಳ್ಯ ತಾಲೂಕು ಹದಿನಾಲ್ಕನೇ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ. 2011- ಮತ್ಸ್ಯಗಂಧಿ ಕಾದಂಬರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ. == ವಿದೇಶ ಪ್ರವಾಸ == 1997 ಭಾರತದ ರೋಟರಿ ಸಾಂಸ್ಕøತಿಕ ರಾಯಭಾರಿಯಾಗಿ ವಿಶ್ವ ರೋಟರಿ ಸಂಸ್ಥೆಯಿಂದ 5 ವಾರಗಳ ಫ್ರಾನ್ಸ್ ಅಧ್ಯಯನ ಪ್ರವಾಸ. 1997 ಸ್ವತಂತ್ರ ಪ್ರವಾಸಿಯಾಗಿ ಇಂಗ್ಲೆಂಡ್, ಬೆಲ್ಜಿಯಂ, ನೆದರ್‍ಲ್ಯಾಂಡ್ಸ್, ಜರ್ಮನಿ, ಆಸ್ಟ್ರಿಯಾ, ಇಟಲಿ ಮತ್ತು ಸ್ವಿಜಲ್ರ್ಯಾಂಡ್ ಪ್ರವಾಸ. == ಉಲ್ಲೇಖ ==